Kannada Sandhigalu :ಸಂಧಿ ಎಂದರೇನು ಅದರ ವಿಧಗಳು

Sandhigalu in Kannada

Here you learn about Kannada sandhigalu :ನಾವು ನೀವು ಮಾತಾಡುವಾಗ ಕೆಲವೊಂದು ಶಬ್ದಗಳನ್ನು ಕೂಡಿಸಿಯೇ ಮಾತಾಡುತ್ತೇವೆ. ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವದಿಲ್ಲ. ವಸಂತ ಇಂದ ಈ ಎರಡೂ ರೂಪಗಳನ್ನು ಕೂಡಿಸಿಯೇ ವಸಂತನಿಂದ ಎಂದು ಹೇಳುತ್ತೇವೆ. ಒಮ್ಮೊಮ್ಮೆ ಶಬ್ದಗಳನ್ನು ಬಿಡಿಬಿಡಿಸಿ- ಮಹೇಶನು ಪೇಟೆಗೆ ಹೋದನು ಹೀಗೆ ಹೇಳಿದರೂ ಪ್ರಕೃತಿ ಪ್ರತ್ಯಯಗಳನ್ನು ಸಂಧಿಸಿ (ಕೂಡಿಸಿ) ಯೇ ಹೇಳಬೇಕಾಗುತ್ತದೆ. ಬಿಡಿಬಿಡಿಸಿ ಹೇಳಲು ಬರುವದೇ ಇಲ್ಲ.




ವ್ಯಾಖರನ(Definition)

  • ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದೆ ಕೊಡುವುದಕ್ಕೆ ಸಂಧಿ ಎಂದು ಹೆಸರು.
  • ಎರಡು ಪದಗಳು ಸಂಧಿಯಾಗುವಾಗ ಮೊದಲ ಪದದ ಕೊನೆಯ ಅಕ್ಷರವೂ, ಎರಡನೇ ಪದದ ಮೊದಲ ಅಕ್ಷರವೂ ಎಡಬಿಡದೆ ಒಂದಕ್ಕೊಂದು ಸೇರುತ್ತವೆ.
  • ಉದಾ (Example):  ನಾವು + ಎಲ್ಲಾ = ನಾವೆಲ್ಲಾ

ಕನ್ನಡದಲ್ಲಿ ಮೂರು ಬಗೆಯ ಸಂಧಿಗಳುಂಟು :

  1. ಲೋಪಸಂಧಿ
  2. ಆಗಮಸಂಧಿ
  3. ಆದೇಶಸಂಧಿ

Sandhigalu in Kannada examples

ಲೋಪಸಂಧಿ

ಸಂಧಿಕಾರ ನಡೆದಾಗ ಇರುವ ಅಕ್ಷರಗಳಲ್ಲೇ ಒಂದು ಅಕ್ಷರವು ಹೊರಟು ಹೋದರೆ (ಲೋಪವಾದರೆ) ಲೋಪಸಂಧಿ ಎನ್ನುವರು.

Lopa sandhi examples in Kannada

ಉದಾ:

  • ನಾವು + ಎಲ್ಲಾ = ನಾವೆಲ್ಲಾ (‘ಉ’ ಕಾರ ಲೋಪವಾಗಿದೆ)
  • ಬೇರೆ + ಒಂದು = ಬೇರೊಂದು (ಎ’ ಕಾರ ಲೋಪವಾಗಿದೆ)
  • ಪೇಟೆ + ಇಂದ = ಪೇಟೆಯಿಂದ
  • ಬಂಧು + ಅನ್ನು = ಬಂಧನ್ನು
  • ಗುರು + ಅನ್ನು = ಗುರುವನ್ನು
  • ಇವನ + ಊರು = ಇವನೂರು
  • ದೇವರು + ಇಂದ = ದೇವರಿಂದ
  • ಒಲ್ಲೆನು + ಎಂದು = ಒಲ್ಲೆನೆಂದು

ಗಮನಿಸಿ(Note): ಲೋಪಸಂಧಿ ಎನಿಸಲು ಸಂಧಿಕಾರ ಮಾಡಿದಾಗ ಅರ್ಥಕ್ಕೆ ಹಾನಿ ಬರಬಾರದು.

ಆಗಮಸಂಧಿ

ಸಂಧಿಕಾರ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರಿದರೆ (ಆಗಮಿಸಿದರೆ) ಆಗಮಸಂಧಿ ಎನಿಸುವುದು.

Agama sandhi examples in Kannada

ಆಗಮಸಂಧಿಯಲ್ಲಿ ಎರಡು ವಿಧ(Types)

  1. ಯ’ ಕಾರಾಗಮ ಸಂಧಿ
  2. ‘ವ’ ಕಾರಾಗಮ ಸಂಧಿ

ಯಕಾರಾಗಮ ಸಂಧಿ

ಸಂಧಿಕಾರ ಮಾಡಿದಾಗ ‘ಯ’ಕಾರವು ಆಗಮವಾದರೆ ಅದು ‘ಯ’ ಕಾರಾಗಮ ಸಂಧಿ ಎನಿಸುವುದು. ಆ, ಇ, ಈ, ವು, ಎ, ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ’ಯ್’ ಕಾರಾಗಮವು ಆಗುವದು.

ಉದಾ:

  • ಮನೆ + ಅಲ್ಲಿ = ಮನೆಯಲ್ಲಿ
  • ಗಾಳಿ + ಇಂದ = ಗಾಳಿಯಿಂದ
  • ಕೆರೆ + ಅಲ್ಲಿ = ಕೆರೆಯಲ್ಲಿ, ಕೆರೆ + ಯ್ + ಅಲ್ಲಿ = ಕೆರೆಯಲ್ಲಿ
  • ಹೊಳೆ + ಇಂದ = ಹೊಳೆಯಿಂದ, ಹೊಳೆ + ಯ + ಇಂದ = ಹೊಳೆಯಿಂದ
  • ಮನೆ + ಅನ್ನು = ಮನೆಯನ್ನು, ಮನೆ + ಯ್ + ಅನ್ನು = ಮನೆಯನ್ನು
  • ಹೊಟ್ಟೆ + ಅಲ್ಲಿ = ಹೊಟ್ಟೆಯಲ್ಲಿ, ಹೊಟ್ಟೆ + ಮ್ + ಅಲ್ಲಿ = ಹೊಟ್ಟೆಯಲ್ಲಿ

ವಕಾರಾಗಮ ಸಂಧಿ

ಸಂಧಿಕಾರ ಮಾಡಿದಾಗ ‘ವ’ ಕಾರವು ಆಗಮವಾದರೆ ಅದು ‘ವ’ ಕಾರಾಗಮ ಸಂಧಿ ಎನಿಸುವುದು. ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ‘ವ’ ಕಾರವು ಆಗಮವಾಗಿರುವದು.

ಉದಾ: 

  • ನಾಣ್ಯ + ಅನ್ನು = ನಾಣ್ಯವನ್ನು
  • ಹೂ + ಇಂದ = ಹೂವಿಂದ
  • ಗುರು + ಅನ್ನು = ಗುರುವನ್ನು ,ಇಲ್ಲಿ ‘ವ್’ ಕಾರವು ಹೊಸದಾಗಿ ಬಂದಿದೆ
  • ಮಗು + ಅನ್ನು = ಮಗುವನ್ನು ಮಗು + ವ + ಅನ್ನು = ಮಗುವನ್ನು
  • ಆ + ಉಂಗುರ = ಆವುಂಗುರು, ಆ + ವ + ಉಂಗುರು = ಆವುಂಗುರು
  • ಆ+ ಊರು = ಆವೂರು, ಆ + ವ್ + ಊರು = ಆವೂರು
  • ಊಟ + ಅನ್ನು = ಊಟವನ್ನು ಊಟ + ವ್+ ಅನ್ನು = ಊಟವನ್ನು

Note :

1) ಅಕಾರದ ಮುಂದೆ ಅಕಾರವೇ ಬಂದರೆ ವಕಾರಾಗಮವಾಗುವದು.

  • ಮಠ + ಅನ್ನು = ಮಠವನ್ನು, ಮಠ + ವ್ + ಅನ್ನು = ಮಠವನ್ನು
  • ಕಂಠ + ಅನ್ನು = ಕಂಠವನ್ನು, + ವನ್ನು = ಕದವನ್ನು
  • ಕಂಠ + ವ್ + ಅನ್ನು = ಕಂಠವನ್ನು ಕದ + ವ್ + ಅನ್ನು = ಕದವನ್ನು
  • ಕಲಹ + ವನ್ನು = ಕಲಹವನ್ನು, ಕಲಹ + ವ + ಅನ್ನು = ಕಲಹವನ್ನು

2) ಅ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ‘ವ್’ ಕಾರವು ಆಗಮವಾಗುವದು.

  • ಆ + ವೋಟ ಆವೋಟ, ಆ + ವ್ = ಓಟ
  • ಆ + ಓತೀಕಾಟ = ಆವೋತೀಕಾಟ, ಆ + ವ್ + ಓತೀಕಾಟ
  • ಆ + ಊರು ಆ + ಒಂಟೆ ಆವೊ೦ಟೆ
  • ಆ+ವ್ + ಊರು = ಆವೂರು ಆ + ವ್ + ಒಂಟೆ = ಆವೊಂಟೆ

3) ಈ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ಯಕಾರಾಗಮವಾಗುವದು ಅಥವಾ ವಕಾರಾಗಮವೂ ಆಗಬಹುದು.

  • ಈ + ಊಟ = ಈಯೂಟ,  ಈ + ಯ್ + ಊಟ
  • ಈ + ವ್ + ಓಲೆ = ಈವೋಲೆ
  • ಈ + ಒಂಟೆ = ಈಯೊಂಟೆ, ಈ + ಯ್ + ಒಂಟೆ

4) ‘ಓ’ ಕಾರದ ಮುಂದೆ ಸ್ವರ ಬಂದರೆ ವಕಾರಾಗಮವಾಗುವದು.

ಗೋ + ಅನ್ನು = ಗೋವನ್ನು, ಗೋ + ವ್ + ಅನ್ನು (ಓ ಅ)

ಆದೇಶಸಂಧಿ

ಸಂಧಿಕಾರ ನಡೆದಾಗ ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಮತ್ತೊಂದು ಅಕ್ಷರ ಬಂದರೆ ಆದೇಶ ಸಂಧಿ ಎನ್ನುತ್ತಾರೆ. (ಕ, ತ, ಪ ವ್ಯಂಜನಗಳಿಗೆ ಗ, ದ, ಬ ಗಳು ಆದೇಶವಾಗುತ್ತವೆ.)

ಸ೦ಧಿಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರವು ಬಂದರೆ ಆದೇಶ ಸಂಧಿಯೆನಿಸುವದು.

ಸಮಾಸದ ಕೊನೆಯ ಪದದ ಮೊದಲನೆಯ ಅಕ್ಷರ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರಾದೇಶವಾಗುವದು.

Adesha sandhi examples in Kannada

ಉದಾ:

  • ಮಳೆ + ಕಾಲ = ಮಳೆಗಾಲ (‘ಕ’ ಕಾರಕ್ಕೆ ‘ಗ’ ಕಾರ ಆದೇಶವಾಗಿದೆ.)
  • ಬೆಟ್ಟ + ತಾವರೆ = ಬೆಟ್ಟದಾವರೆ (ತ’ ಕಾರಕ್ಕೆ ‘ದ’ ಕಾರ ಆದೇಶವಾಗಿದೆ.)
  • ಬು ಹೂ + ಪುಟ್ಟ, = ಹೂಬುಟ್ಟಿ (‘ಪ’ ಕಾರಕ್ಕೆ ‘ಬ’ ಕಾರ ಆದೇಶವಾಗಿದೆ.)
  • ಹಳ + ಕನ್ನಡ ಹಳಗನ್ನಡ (ಹಳ + ಗ್ + ಅ + ನಡ)
  • ಕಳೆ + ಕುಂದು = ಕಳೆಗುಂದು (ಕಳೆ + ಗ್ + ಉಂದು)
  • ಚಳಿ + ಕಾಲ = ಚಳಿಗಾಲ (ಚಳಿ + ಗ್ + ಆ)
  • ಕೆನೆ + ವಾಲು = ಕೆನೆವಾಲು
  • ಎಳೆ + ಬಳ್ಳಿ = ಎಳೆವಳ್ಳಿ, ಬಕಾರಕ್ಕೆ ವಕಾರಾದೇಶ
  • ನೆಲೆ + ಮನೆ = ನೆಲೆಮನೆ, ಮಕಾರಕ್ಕೆ ವಕಾರಾದೇಶ
  1. ಸಕಾರಕ್ಕೆ ಚಕಾರ ಬರುವದು: ಇನ್ + ಸರ ಇಂಚರ (ಇನ್ + ಚ್ + ಅರ) , ನುಣ್ + ಸರ = ನುಚ್ಚರ (ನುಣ್+ ಚ್ + ಅರ)

2) ಸಕಾರಕ್ಕೆ ಜಕಾರ ಬರುವದು: ತಣ್ + ಸೊಡರ್ = ತಣ್ಡರ್, (ತಣ್ + ಜ + ಒಡರ್)

3) ಸಕಾರಕ್ಕೆ ಛಕಾರ ಬರುವದು: ನೂರ್ + ಸಾಸಿರ = ನೂರ್ಛಾಸಿರ (ನೂರ್ + ಛ + ಅಸಿರ)

4) ಕೆಲವು ಕಡೆ ಯಾವ ಆದೇಶವು ಬರುವದಿಲ್ಲ: ಕಣ್ + ಸವಿ = ಕಣ್ಣವಿ,  ಬೆಳ್ + ಸಿರಿ = ಬೆಳ್ಳಿರಿ.

ಪ್ರಕೃತಿ ಭಾವ

ಲೋಪ, ಆಗಮ, ಆದೇಶ ಸಂಧಿಗಳಾಗದಿರುವ ವಾಕ್ಯಕ್ಕೆ ಪ್ರಕೃತಿಭಾವ.

  • ಅವನು ಬಂದನೇನು ?  – ಅವನು = ಸಂಧಿಯಿಲ್ಲ.
  • ಇದೇನಾಯಿತು  – ಇದೇನಾಯಿತು – ಸಂಧಿಯಿಲ್ಲ

ಭಾವ ಸೂಚಕ ಅವ್ಯಯಗಳು

ಸಂಸ್ಕೃತ ಸಂಧಿಗಳು(Samskrutha sandhi in Kannada)

ಸಂಸ್ಕೃತ ಸಂಧಿಗಳಲ್ಲಿ ಮೂರು ವಿಧ :

  1. ಸ್ವರಸಂಧಿ
  2. ವ್ಯಂಜನಸಂಧಿ
  3. ವಿಸರ್ಗಸಂಧಿ.

ಸ್ವರಸಂಧಿ

ಸ್ವರಸಂಧಿಯಲ್ಲಿ ೪ ವಿಧ :

ಸವರ್ಣ ದೀರ್ಘ ಸಂಧಿ

ಒಂದೇ ಜಾತಿಯ ಅಕ್ಷರಗಳು ಪರಸ್ಪರ ಪರವಾಗಿ ಸಂಧಿಯಾದ ನಂತರ ಅದೇ ಅಕ್ಷರವು ದೀರ್ಘವಾದರೆ ಅದು ಸವರ್ಣದೀರ್ಘಸಂಧಿ ಎನಿಸುವುದು.

ನಿಯಮ ಉದಾ :-

ಸವರ್ಣ ಸ್ವರಗಳು ಒಂದರ ಮುಂದೆ ಬಂದರೆ ಅವೆರಡರ ಸ್ಥಳದಲ್ಲಿ ಅದೇ ಜಾತಿಯ ದೀರ್ಘಸ್ವರವು ಆದೇಶವಾದಾಗ,

  • ಸಚಿವ + ಆಲಯ = ಸಚಿವಾಲಯ (ಸಚಿವ್ + ಆ + ಆಲಯ = ಸಚಿವಾಲಯ)
  • ದೇವ + ಆಲಯ = ದೇವಾಲಯ (ಆ + ಆ = ಆ ಸವರ್ಣದೀರ್ಘ ಸ್ವರಗಳು ಬಂದು ದೀರ್ಘವಾಗಿದೆ)
  • ರವಿ + ಇಂದ್ರ = ರವೀಂದ್ರ  (ಇ+ಇ= ಈ ಸವರ್ಣ ಸ್ವರಗಳು ಬಂದು ದೀರ್ಘವಾಗಿವೆ)
  • ಗುರು + ಉಪದೇಶ = ಗುರೂಪದೇಶ (ಉ + ಉ + ಊ ಸವರ್ಣ ಸ್ವರಗಳು ಬಂದು ದೀರ್ಘವಾಗಿದೆದೀರ್ಘವಾಗಿದೆ)
  • ಮಹ್ + ಈ + ಇಂದ್ರ = ಮಹೇಂದ್ರ
  • ಗುರು + ಉತ್ತಮ = ಗುರೋತ್ತಮ (ಗುರ್ + ಉ + ಉತ್ತಮ = ಗುರೋತ್ತಮ)

                   ಗುಣಸಂಧಿ

ಅ, ಆ ಕಾರಗಳ ಮುಂದೆ ಇ, ಈ ಕಾರವು ಬಂದರೆ ‘ಏ’ ಕಾರವು, ಉ, ಊ ಕಾರವು ಬಂದರೆ ಓ ಕಾರವೂ ‘ಋ’ ಕಾರವು ಬಂದರೆ ‘ಅರ್’ ಕಾರವೂ ಆದೇಶವಾಗಿ ಬಂದರೆ ಅದನ್ನು ಗುಣಸಂಧಿ ಎನ್ನುತ್ತಾರೆ.

  • ಸುರ + ಈಶ = ಸುರೇಶ (ಅ + ಈ = ಏ)
  • ಚಂದ್ರ + ಉದಯ = ಚಂದ್ರೋದಯ (ಅ + ಉ = ಓ)
  • ಮಹ + ಋಷಿ = ಮಹರ್ಷಿ (ಅ + ಋ = ಅರ್) ೩.

                 ವೃದ್ಧಿಸಂಧಿ

ಅ, ಆ ಕಾರಗಳ ಮುಂದೆ ಏ, ಐ ಕಾರವು ಬಂದಾಗ ಐ ಕಾರವೂ, ಓ, ಔ ಕಾರವು ಬಂದಾಗ ‘B’ ಕಾರವೂ ಆದೇಶವಾಗಿ ಬಂದರೆ ವೃದ್ಧಿಸಂಧಿ ಎನಿಸುವುದು.

  • ಏಕ + ಏಕ = ಏಕೈಕ (ಅ + ಏ = ಐ)
  • ವನ + ಓಷದ = ವನೌಷಧ (ಅ + ಓ = ಔ)

                 ಯಣ್‌ಸಂಧಿ

ಸ್ವರದ ಮುಂದೆ ಸ್ವರ ಪರವಾಗಿ, ಸಂಧಿಯಾದ ನಂತರ ಯ, ವ, ರ ಅಕ್ಷರಗಳು ಆದೇಶವಾದಲ್ಲಿ

Yan sandhi examples in Kannada

  • ಅತಿ + ಅಂತ = ಅತ್ಯಂತ (ಇ + ಅ =ಯ)
  • ಮನು + ಅಂತರ = ಮನ್ನಂತರ (ಉ + ಅ = ವು)
  • ಪಿತೃ + ಆರ್ಜಿತ = ಪಿತ್ರಾರ್ಜಿತ (ಸ + ಆ = ರ)

                ವ್ಯಂಜನ ಸಂಧಿ

ಇದರಲ್ಲಿ ಮೂರು ವಿಧ :

ಜತ್ತ್ವಸಂಧಿ

ಪೂರ್ವಪದದ ಕೊನೆಯಲ್ಲಿರುವ ಕ್, ಚ್, ಟ್, ತ್, ಪ್ ಗಳಿಗೆ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಅಂದರೆ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದೇ ಜಶ್ವ ಸಂಧಿ.

  • ದಿಕ್ + ಅಂತ = ದಿಗಂತ (ಕ > ಗ)
  • ಷಟ್ – ಅವನ = ಷಡಾನನ (ಟ > ಡ)
  • ಚಕ್ – ಆನಂದ = ಚಿದಾನಂದ (ತ > ದ)

ಶ್ರುತಸಂಧಿ

‘ಸ’ಕಾರದ ಎದುರಿಗೆ ‘ಶ’ ಕಾರವು ಬಂದು, ‘ಸ’ ಕಾರಕ್ಕೆ ‘ಶ’ ಕಾರ ಬರುವುದೂ, ‘ಸ’ ಕಾರದ ಎದುರಿಗೆ ‘ಚ’ ವರ್ಗವು ಬಂದು `ಸ’ ಕಾರಕ್ಕೆ ‘ಶ’ ಕಾರ ಬರುವುದೂ; ‘ತ’ ವರ್ಗದ ಎದುರಿಗೆ ‘ಚ’ ವರ್ಗವು ಬಂದು ‘ತ’ ವರ್ಗಕ್ಕೆ ‘ಚ’ ವರ್ಗ ಬರುವುದೂ ಶ್ರುತ ಸಂಧಿ ಎನಿಸುವುದು.

ಉದಾ:

  • ತಪಸ್ – ಶಾಂತಿ = ತಪಶಾಂತಿ
  • ಮನಸ್ + ಚಂಚಲ = ಮನಶ್ಚಂಚಲ
  • ಶರತ್ + ಚಂದ್ರ = ಶರಚಂದ್ರ
  • ಸತ್ + ಚಿತ್ರ = ಸಚ್ಚಿತ್ರ
  • ಸತ್ + ಜನ = ಸಜ್ಜನ

ಅನುನಾಸಿಕ ಸಂಧಿ

ಪೂರ್ವ ಪದದ ಕೊನೆಯಲ್ಲಿನ ಕ, ಚ, ಟ, ತ, ಪ ಗಳಿಗೆ ಜ, ಞ, ಣ, ನ, ಮ (ಅನುನಾಸಿಕಗಳು) ಪರವಾದರೆ ಅದು ಅನುನಾಸಿಕ ಸಂಧಿ ಎನಿಸುವುದು.

ಉದಾ:

  • ವಾಕ್ + ಮಯ = ವಾಲ್ಮೀಯ (ಕ > ಬಿ)
  • ಸತ್ + ಮಾನ = ಸನ್ಮಾನ (ತ>ನ)
  • ಪಟ್ + ಮುಖ = ಷಣ್ಮುಖ (ಟ > ಣ)

ವಿಸರ್ಗ ಸಂಧಿ

ವಿಸರ್ಗದೊಡನೆ ವ್ಯಂಜನಾಕ್ಷರ ಸೇರಿ ಸಂಧಿಯಾಗುವುದಕ್ಕೆ ವಿಸರ್ಗಸಂಧಿಯೆಂದು ಹೆಸರು.

  • ನಿ: + ಚಲ = ನಿಶ್ಚಲ
  • ಮನಃ + ತಾಪ = ಮನಸ್ತಾಪ
  • ನಿ: + ಸಂದೇಹ = ನಿಸ್ಸಂದೇಹ

ಸಂಸ್ಕೃತ ವ್ಯಂಜನ ಸಂಧಿಗಳು

ಜಸ್ರ ಸಂಧಿ

ಜಸ್ ಎಂದರೆ ಸಂಸ್ಕೃತದಲ್ಲಿ ‘ಜಲಗಡದ’ ಈ ಐದು ವ್ಯಂಜನಗಳನ್ನು ತಿಳಿಸುವ ಆದೇಶ ಸಂಜ್ಞೆ ಯಾವ ಯಾವ ಅಕ್ಷರಗಳಿಗೆ ಇವು ಆದೇಶವಾಗಿ ಬರುತ್ತಿವೆ, ಎಂಬುದಾಗಿ ವಿಚಾರಿಸುವಾ.

  1. ಸಂಸ್ಕೃತ ವ್ಯಾಕರಣದಲ್ಲಿ ಅಜಂತ ಎಂದರೆ ಸ್ವರಾಂತ ಸಂಜ್ಞೆ
  2. ರಾಜನಿಗೆ ದಿಗಂಗನೆಯರು ಆರತಿಯನ್ನೆತ್ತಿದರು.
  3. ಅಬ್ಬಿಯ ತೆರೆಗಳು ಬಲು ದೊಡ್ಡವು.
  4. ಷಡಾನನನು ದೇವತೆಗಳ ಸೇನಾಪತಿ.
  5. ಸದಾನಂದನು ಪೇಟೆಗೆ ಹೋದನು.

ಮೇಲಿನ ವಾಕ್ಯಗಳಲ್ಲಿಯ ಅಜಂತ, ದಿಗಂಗನೆಯರು, ಅಬ್ಬಿ, ಷಡಾನನನು, ಸದಾನಂದನ ಶಬ್ದಗಳನ್ನು ಬಿಡಿಸಿ ಬರೆಯುವಾಗ….

  • ಅಜ್ + ಅಂತ = ಅಜ್ + ಅಂತ = ಅಜಂತ ( ಚಕಾರಕ್ಕೆ ಜಕಾರಾದೇಶ)
  • ದಿಕ್ + ಅಂಗನೆ + ದಿಗ + ದಿಗಂಗನೆ (ಕಕಾರಕ್ಕೆ ವಕಾರಾದೇಶ)
  • ಆಪ್ + ಧಿ ಅಬ್ + ಧಿ = ಅಬ್ಬಿ (ಸಮುದ್ರ) (ಬಕಾರಾದೇಶ)
  • ಷಟ್ + ಅವನ = ಷಟ್ + ಆನನ= ಷಡಾನನ (ಟಕಾರಕ್ಕೆ ಡಕಾರಾದೇಶ)
  • ಸತ್ + ಆನ೦ದ = ಸದ್ + ಆನಂದ (ತಕಾರಕ್ಕೆ ದಕಾರಾದೇಶ)

ನಿಯಮ : ಕ ಚ ಟ ತ ಪ ಗಳಿಗೆ ಜ ಡ ದ ಬ ಆದೇಶವಾಗಿ ಬಂದರೆ ಜಶ ಸ೦ಧಿ ಎನಿಸುವದು.

ಉದಾಹರಣೆಗಳು :

  • ವಾಕ್ + ದಾನ = ವಾಗ್ದಾನ (ಕಕಾರಕ್ಕೆ ಗಕಾರಾದೇಶ)
  • ದಿಕ್ + ದೇಶ = ದಿಕ್ ದೇಶ – ದಿಗ್ದಶ (ಗಕಾರಾದೇಶ)
  • ಅಚ್ + ಅಂತ್ ಅಚ್ ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
  • ಅಚ್ + ಆದಿ = ಅಚ್ ಆದಿ – ಅಜಾದಿ (ಚಕಾರಕ್ಕೆ ಜಕಾರಾದೇಶ)
  • ಷಟ್ + ಆನನ ಷಡ್ ಆನನ = ಅಡಾನನ (ಟಕಾರಕ್ಕೆ ಡಕಾರಾದೇಶ)
  • ಷಟ್ + ಅಂಗನೆ = ಷಡ ಅಂಗನೆ – ಷಡಂಗನೆ (ಟಕಾರಕ್ಕೆ ಡಕಾರಾದೇಶ)
  • ಚಿತ್ + ಆನಂದ = ಚಿದ್ ಆನಂದ – ಚಿದಾನಂದ (ತಕಾರಕ್ಕೆ ದಕಾರಾದೇಶ)
  • ಸದ್ + ಉತ್ತರ = ಸದ್ ಉತ್ತರ – ಸದುತ್ತರ (ತಕಾರಕ್ಕೆ ದಕಾರಾದೇಶ)
  • ಅಪ್ + ಜ = ಅಬ್ಬ(ಪಕಾರಕ್ಕೆ ಬಕಾರಾದೇಶ)
  • ಅಪ್ + ಅಂಶ = ಅಬ್ ಅಂಶ – ಅಬಂಶ (ಸಕಾರಕ್ಕೆ ಬಕಾರಾದೇಶ)

ಪಾಣಿನಿ ಸೂತ್ರ – ಝಲಾಂ ಜಶೋಽನೇ (8-2-49)

ಜಸ್ಥ್ವ ಸಂಧಿ ಯಾಗದಿರುವ ಉದಾಹರಣೆಗಳು

ದಿಕ್ + ಚಕ್ರ = ದಕ್ಷತ್ರ, ಸತ್ + ಕವಿ = ಸತ್ಕವಿ ವಾಕ್ + ಪತಿ = ವಾಕೃತಿ, ದಿಕ್ + ಸೂಚಿ = ದಿಕ್ಕೂಚಿ




Also Read: Vishnu sahasranamam lyrics in Kannada

                      ಶ್ಚುತ್ವ ಸಂಧಿ

ಸತ್ + ಚಿತ್ರ + ಸಚ್ + ಚಿತ್ರ – ಸಚಿತ್ರ (ತಕಾರಕ್ಕೆ ಚಕಾರ ಪರವಾಗಿ ಚಕಾರಾದೇಶ)

  • ಲಸತ್ + ಚಿತ್ರ = ಲಸಚಿತ್ರ
  • ಮನಸ್ + ಶುದ್ಧಿ = ಮನಶುದ್ಧಿ (ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
  • ಬೃಹತ್ + ಛತ್ರ = ಬೃಹತ್ + ಛತ್ರ = ಬೃಹಚ್ಛತ್ರ (ತಕಾರಕ್ಕೆ ಛಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
  • ಮನಸ್ + ಚಂಚಲ = ಮನಸ + ಚಂಚಲ = ಮನಶ್ಚಂಚಲ (ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
  • ಜಗತ್ + ಜ್ಯೋತಿ = ಜಗತ್ + ಜ್ಯೋತಿ = ಜಗಜ್ಯೋತಿ (ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಜಕಾರದೇಶ, ಅನಂತರ ಜಕಾರಾದೇಶವಾಗಿದೆ)
  • ಉದಾಹರಣೆಗಳು : ಮನಶ್ಚಂಚಲ, ಮನಶ್ಚಪಲ, ಮನಶ್ಯಾಂತಿ

‘ಸ ತ ಥ ದ ಧ ನ’ ಗಳಿಗೆ ‘ತ ಚ ಛ ಜ ಝ ಞ’ ಅಕ್ಷರಗಳು ಆದೇಶವಾಗಿ ಬರುತ್ತವೆ.

ಶ್ = ಶಕಾರ ಚು ಚ ಛ ಜ ಝ ಞ ಈ ಅಕ್ಷರಗಳೇ ‘ಸ್ಟು’ ಎಂಬ ಸಂಜ್ಞೆಯಿಂದ ಕರೆಯಿಸಿಕೊಳ್ಳುವವು.

ಪಾಣಿನಿ ಸೂತ್ರ – ಸ್ತೋ ಸ್ಟುನಾಶುಃ (8-4-40)

                 ಅನುನಾಸಿಕ ಸಂಧಿ

ಜ, ಞ, ಣ, ನ, ಮ, ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಸಂಜ್ಞಾ ಪ್ರಕರಣದಲ್ಲಿಯ ಮಾಹೇಶ್ವರ ಸೂತ್ರಗಳಲ್ಲಿ ಯೂ ಆದೇಶ ಸಂಧಿಯೆನಿಸಿದೆ. ಏಳನೆಯದಾಗಿದೆ. ಈ ಸಂಧಿ

  1. ಅಪ್ + ಮಯ = ಅಮ + ಮಯ = ಅಮ್ಮಯ (ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ.)
  2. ಷಟ್ + ಮಾಸ = ಷಣ್ + ಮಾಸ = ಷಣ್ಮಾಸ (ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
  3. ವಾಕ್ + ಮಯ = ವಾಚ್ + ಮಯ = ವಾಹ್ಮಯ (ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ 2 ಕಾರಾದೇಶ)
  4. ಸತ್ + ಮಾನ = ಸನ್ + ಮಾನ = ಸನ್ಮಾನ (ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶ)

ನಿಯಮ : ವರ್ಗದ ಪ್ರಥಮ ವರ್ಗಗಳಾದ ಕ್ ಚ್ ಟ್  ವ್ಯಂಜನಗಳಿಗೆ ಕ್ರಮವಾಗಿ ಜ್, ಞ, ಣ್, ನ್, ಮ್ ವ್ಯಂಜನಗಳು ಆದೇಶವಾಗಿ ಬರುತ್ತವೆ.

ಉದಾಹರಣೆಗಳು :

  • ವಾಕ್ ಮಾಧುರ = ವಾಜ + ಮಾಧುರ = ವಾಾಧುರ (ಕಕಾರಕ್ಕೆ ಮಕಾರ ಪರವಾಗಿ ಜಕಾರಾದೇಶ)
  • ಚಿತ್ + ಮಯ = ಚಿನ್ + ಮಯ = ಚಿನ್ಮಯ (ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
  • ಸತ್ + ಮಣಿ + ಸನ್ + ಮಣಿ = (ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)

Chart for easy remembrance

ಸಂಧಿಗಳು-ಅಭ್ಯಾಸ ಪ್ರಶ್ನೆಗಳು
  1. ಸಂಧಿ ಎಂದರೇನು?
  2. ದೇವರು + ಅಲ್ಲಿ, ಊರು + ಊರು, ಜಾತ್ರೆ + ಆಯಿತು, ಗುರು + ಅನ್ನು, ಹೊಲ + ಅನ್ನು ಇದನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.
  3. ಯಕಾರಾಗಮ ವಕಾರಾಗಮ ಸಂಧಿಗಳು ಎಲ್ಲೆಲ್ಲಿ ಬರುತ್ತವೆ, ತಿಳಿಸಿರಿ.
  4. ಪಿತೃ + ಅನ್ನು, ಮಾತೃ + ಅನ್ನು, ಮನೆ + ಅನ್ನು, ಗಿರಿ + ಅನ್ನು, ಸಿರಿ + ಅನ್ನು  ಇವನ್ನು ಕೂಡಿಸಿ ಬರೆದು ಯಾವ ಸಂಧಿ ಎಂಬುದನ್ನು ತಿಳಿಸಿರಿ.  ಇಲ್ಲಿ ಲೋಪ ಮಾಡಿದ್ದರೆ ಹೇಗೆ ರೂಪಗಳಾಗುತ್ತಿದ್ದವು?
  5. ಅವನಲ್ಲಿ, ಊರನ್ನು, ದೇವರಲ್ಲಿ, ಮನೆಯಲ್ಲಿ, ಗುರುವನ್ನು, ಮಾತೃವನ್ನು, ಶತ್ರುವನ್ನು, ಮನವನ್ನು ಈ ಪದಗಳಲ್ಲಿರುವ ಸಂಧಿಗಳನ್ನು ಬಿಡಿಸಿ ಬರೆದು ಯಾವ ಯಾವ ಸಂಧಿಗಳೆಂಬುದನ್ನು ಹೆಸರಿಸಿರಿ.

ಈ ಕೆಳಗೆ ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಶಬ್ದದಿಂದ ತುಂಬಿರಿ:-

(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕತಪ ಗಳಿಗೆ ____________
(ii) ಮಳೆ + ______ = ಮಳೆಗಾಲ,           ಇನಿದು + _______ = ಇಂಚರ
ನೀರ್ + ______ = ನೀರ‍್ವೊನಲ್,         ಬೇರ್ + _______ = ಬೇರ‍್ವೆರಸಿ
(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ____________
(iv) ಸ್ವರದ ಮುಂದೆ ಸ್ವರ ಬಂದರೂ ಕೆಲವು ಕಡೆ ಲೋಪ, ಆಗಮ, ಆದೇಶಗಳು ಆಗುವುದಿಲ್ಲ.  ಇದಕ್ಕೆ ___________
(v) ಸ್ವರಕ್ಕೆ ಸ್ವರವು ಪರವಾದಾಗ ಅರ್ಥಕ್ಕೆ ಹಾನಿ ಬಾರದಿದ್ದರೆ __________ ಸ್ವರವು ಲೋಪವಾಗುವುದು.
(vi) _______  ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ಯಕಾರಾಗಮವಾಗುವುದು.
(vii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪಬಮ ಗಳಿಗೆ _______ ವು ಆದೇಶವಾಗಿ ಬರುವುದು.
(viii) ಭಾವಸೂಚಕಾವ್ಯಯಗಳ ಮುಂದೆ ಸ್ವರ ಬಂದರೆ __________
(ix) ಪ್ಲುತಕ್ಕೆ ಸ್ವರ ಪರವಾದರೆ ______________

೭. ಈ ಕೆಳಗಿನ ವಾಕ್ಯಗಳಲ್ಲಿ ದೋಷಗಳಿವೆ.  ಅವನ್ನು ತಿದ್ದಿ ಹೇಳಿರಿ:-

(i) ಪ್ಲುತಸ್ವರವೆಂದರೆ, ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರ.
(ii) ಆಗಮ ಸಂಧಿಯೆಂದರೆ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದು.
(iii) ವ್ಯಂಜನಗಳು ಅ ಕಾರದಿಂದ ಔ ಕಾರದವರೆಗೆ ಹದಿನಾಲ್ಕು.
(iv) ಒಂದು ವ್ಯಂಜನದ ಮುಂದೆ ಇನ್ನೊಂದು ವ್ಯಂಜನ ಬಂದಾಗ ಲೋಪಸಂಧಿಯಾಗುವುದು.

೮. ಈಕೆಳಗೆ ಬಿಟ್ಟಿರುವ ಸ್ಥಳಗಳ ಮುಂದೆ ಆವರಣದಲ್ಲಿ ಕೊಟ್ಟಿರುವ ಸರಿಯಾದ ಒಂದು ಉತ್ತರವನ್ನು ಆರಿಸಿ ಬರೆಯಿರಿ.

(i) ಊರೂರು= (ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ)
(ii) ಮನೆ+ಅನ್ನು=(ಆಗಮ ಸಂಧಿ, ಆದೇಶಸಂಧಿ, ಲೋಪಸಂಧಿ)
(iii) ಅ ಶಬ್ದದ ಮುಂದೆ ಅಕಾರ ಪರವಾದರೆ (ಲೋಪಸಂಧಿ, ಆಗಮಸಂಧಿ, ಸಂಧಿಯಾಗುವುದಿಲ್ಲ)
(iv) ನಿಪಾತಾವ್ಯಯದ ಮುಂದೆ ಸ್ವರ ಬಂದರೆ ಎನಿಸುವುದು. (ಪ್ರಕೃತಿಭಾವ, ಆಗಮ, ಆದೇಶ)
(v) ಇಕಾರಕ್ಕೆ ಸ್ವರ ಪರವಾದರೆ (ಯಕಾರಾಗಮ, ವಕಾರಾಗಮ, ಲೋಪವಾಗುವುದು)
(vi) ಸ್ವರಕ್ಕೆ ಸ್ವರ ಪರವಾದರೆ ಸ್ವರವು ಲೋಪವಾಗುವುದು. (ಪೂರ್ವದ, ಮಧ್ಯದ, ಉತ್ತರದ)
(vii) ಪ್ಲುತಸ್ವರಕ್ಕೆ ಸ್ವರ ಪರವಾದರೆ  ಬರುವುದು. (ಯಕಾರಾಗಮ, ವಕಾರಾಗಮ, ಪ್ರಕೃತಿಭಾವ)
(viii) ಪ್ಲುತಸ್ವರವೆಂದರೆ (ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರ)
(ix) ಆದೇಶವೆಂದರೆ (ಒಂದು ಅಕ್ಷರದ ಸ್ಥಳದಲ್ಲಿ ಬರುವ ಬೇರೊಂದು ಅಕ್ಷರ, ಹೊಸದಾಗಿ ಬರುವ ಅಕ್ಷರ, ಇಲ್ಲದಂತಾಗುವ ಅಕ್ಷರ)

 

4 thoughts on “Kannada Sandhigalu :ಸಂಧಿ ಎಂದರೇನು ಅದರ ವಿಧಗಳು”

Leave a Comment

error: Content is protected !!
%d bloggers like this: