KannadaKaliyona

Vibhakti Pratyaya in Kannada :ವಿಭಕ್ತಿ ಪ್ರತ್ಯಾಯಗಳು

Vibhakti Pratyaya in Kannada

Here you will learn about vibhakti pratyaya in Kannada and vibhakti pratyaya in Kannada examples.

ಇದುವರೆಗೆ ನಾಮಪ್ರಕೃತಿ, ಲಿಂಗ ಮತ್ತು ವಚನಗಳ ಬಗೆಗೆ ಅರಿತಿರುವಿರಿ. ನಾಮಪ್ರಕೃತಿಗಳಿಗೆ ಆ ವಿಧವಾದ ವಿಭಕ್ತಿಪ್ರತ್ಯಯಗಳು ಅನೇಕ ಕಾರಕಾರ್ಥಗಳಲ್ಲಿ ಸೇರುವುವು. ಈಗ ಹಾಗೆ ಬರುವ ಪ್ರತ್ಯಯಗಳಾವುವು? ಅವುಗಳ ಪ್ರಯೋಜನವೇನು ಎಂಬುದನ್ನು ತಿಳಿಯೋಣ, ಈ ಕೆಳಗಿನ ವಾಕ್ಯಗಳನ್ನು ನೋಡಿರಿ:

`ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು” ಈ ವಾಕ್ಯವ-ಭೀಮ, ತಾನು, ಬಲಗಾಲು, ಚೆಂಡು-ಹೀಗೆ ಕೇವಲ, ನಾಮಪ್ರಕೃತಿಗಳನ್ನೇ ಹೇಳಿ ಒಡೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ. ಭೀಮ, ತಾನು, ಬಲಗಾಲು, ಚೆಂಡು ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ

ಒಂದು ಸಂಬಂಧವಿದೆ. ಈ ಸಂಬಂಧವನ್ನು ಪ್ರತ್ಯಯಗಳು ಉಂಟುಮಾಡುತ್ತವೆ.

ಹೇಗೆಂಬುದನ್ನು ನೋಡಿರಿ,

`ಭೀಮ’ ಎಂಬ ಪ್ರಕೃತಿಯ ಮೇಲೆ ಈ ಪ್ರತ್ಯಯ ಸೇರಿದಾಗ ಭೀಮನು’ ಎಂಬ ಕರ್ತಪದವಾಗಿ ಒಡೆಯುವ ಕೆಲಸ ಮಾಡಿದನು ಎಂಬ ಅರ್ಥವು ಹೊಳೆಯುವುದು-ಮುಂದಿನ ಪ್ರಶ್ನೆ ಏನನ್ನು ಒದೆದನು? ಎಂಬುದು. ಆಗ ಚೆಂಡು ಎಂಬ ಪ್ರಕೃತಿಯ ಮೇಲೆ ಕರ್ಮಾರ್ಥದ ‘ಅನ್ನು’ ಪ್ರತ್ಯಯ ಸೇರಿ ಚೆಂಡನ್ನು’ ಎಂಬ ಕರ್ಮಪದವಾಯಿತು. ಒಡೆಯುವುದಕ್ಕೆ ಇದು ಕರ್ಮವಾಯಿತು. ಇದರಂತೆ ಮುಂದೆ ಯಾವುದರಿಂದ? ಎಂಬ ಪ್ರಶ್ನೆ ಹುಟ್ಟುವುದು. ಆಗ ಬಲಗಾಲು” ಎಂಬ ಪ್ರಕೃತಿಯ ಮುಂದೆ ಸಾಧನಾರ್ಥಕ (ಕರಣಾರ್ಥಕ) ಇಂದ’ ಪ್ರತ್ಯಯವು ಸೇರಿ, ಬಲಗಾಲಿನಿಂದ’ ಎಂಬ ಕರಣಾರ್ಥಕ ಪದದ ಸಂಬಂಧವುಟಾಯಿತು. ತಾನು ಎಂಬ ಪ್ರಕೃತಿಯ ಮೇಲೆ ಆ ಎಂಬ ಸಂಬಂಧಾರ್ಥಕ ಪ್ರತ್ಯಯ ಸೇರಿ ತನ್ನ ಸಂಬಂಧವಾದ ಬಲಗಾಲಿ ಬಂದ ಎಂಬ ಸಂಬಂಧವು ಸೂಚಿತವಾಗುವುದು.

ಇಲ್ಲಿ ಬಂದಿರುವ ನಾಲ್ಕು ಪ್ರಕೃತಿಗಳ ಮೇಲೂ,

೧. ಭೀಮನು’ ಎಂಬಲ್ಲಿಯ ಈ ಪ್ರತ್ಯಯ ಕರ್ತಥ್ರದಲ್ಲೂ,

೨. ಚೆಂಡನ್ನು ‘ಎಂಬಲ್ಲಿಯ ಅನ್ನು ಪ್ರತ್ಯಯ ಕರ್ಮಾರ್ಥದಲ

೩. ‘ತನ್ನ’ ಎಂಬಲ್ಲಿಯ ಈ ಪ್ರತ್ಯಯ ಸಂಬಂಧದಲ್ಲೂ,

೪. ಬಲಗಾಲಿನಿಂದ’ ಎಂಬಲ್ಲಿಯ ಇಂದ’ ಪ್ರತ್ಯಯ ಸಾಧನಾರ್ಥದಲ್ಲೂ ಎಂದರೆ ಕರಣಾರ್ಥದಲ್ಲೂ ಸೇರಿ ವಾಕ್ಯದಲ್ಲಿ ಪರಸ್ಪರ ಸಂಬಂಧವನ್ನುಂಟುಮಾಡುವುದ

ಕೇವಲ ಪ್ರಕೃತಿಗಳನ್ನೇ ಪ್ರಯೋಗ ಮಾಡುವುದು ಸಾಧ್ಯವಿಲ್ಲ. ಪ್ರಯೋಗ ಮಾಡಲೂ -ಬಾರದು ಎಂಬುದು ಮೇಲಿನ ವಿವರಣೆಯಿಂದ ಅರ್ಥವಾಗುವುದು. ಅಲ್ಲದೆ ಈ, ಅನ್ನು, ಇಂದ, ಇತ್ಯಾದಿ ಪ್ರತ್ಯಯಗಳೂ ಪ್ರಯೋಗಕ್ಕೆ ಯೋಗ್ಯವಲ್ಲ. ಕೆಲವು ಕಡೆ ವಾಕ್ಯಗಳಲ್ಲಿ ವಿಭಕ್ತಿಪ್ರತ್ಯಯವು ಇಲ್ಲದಂತೆ ಕಂಡುಬಂದರೂ ಅವು ಬಂದು ಲೋಪವಾಗಿವೆಯೆಂದು ಭಾವಿಸಬೇಕು.

Vibhakti Pratyaya in Kannada examples

ಭೀಮನು ಚೆಂಡನ್ನು ಎಸೆದನು -ಎಂಬ ವಾಕ್ಯವು ಭೀಮ್ ಚೆಂಡನ್ನು ಎಸೆದನು-ಹೀಗೆ ಪ್ರಯೋಗಿಸಲ್ಪಟ್ಟರೆ ಭೀಮ’ ಎಂಬುದರ ಮೇಲೆ ವಿಭಕ್ತಿಪ್ರತ್ಯಯವೇ ಬಂದಿಲ್ಲವೆಂದು ಹೇಳಲಾಗದು. ಆದರೆ ಅಲ್ಲಿ ಈ’ ಎಂಬ ವಿಭಕ್ತಿಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು. ಹಾಗಾದರೆ ವಿಭಕ್ತಿಪ್ರತ್ಯಯವೆಂದರೇನು? ಎಂಬ ಬಗೆಗೆ

ಕೆಳಗಿನಂತೆ ಸೂತ್ರವನ್ನು ಹೇಳಬಹುದು.

(52) .ಕರ್ತ, ಕರ್ಮ, ಕರಣ, ಸಂಪ್ರದಾನ, ಆಪಾದಾನ, ಆಧಿಕರಣಾಧಿಕಾರಕಾರ್ಥ ಗಳನ್ನು ವಿಭಾಗಿಸಿಕೊಡುವ ಶಬ್ದರೂಪವೇ ವಿಭಕ್ತಿ ಎನಿಸುವುದು.

ಷಷ್ಠಿ ವಿಭಕ್ತಿಯು ಕಾರಕಾರ್ಥಗಳಲ್ಲಿ ಸೇರಿಲ್ಲ, ಅದರ ಹಾಗೆ ಸಂಬೋಧನಾ ವಿಭಕ್ತಿಯ ಸೇರಿಲ್ಲ. ಕೇವಲ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥಿ, ಪಂಚಮಿ, ಸಪ್ತಮೀ ಈ ಆರು ವಿಭಕ್ತಿಗಳೇ, ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವಂಥವುಗಳು, ಅವುಗಳ ವಿಷಯವನ್ನು ಈಗ ತಿಳಿಯೋಣ,

ವಿಭಕ್ತಿಪ್ರತ್ಯಯಗಳು ನಾಮಪ್ರಕೃತಿಗಳ ಮೇಲೆ, ಸೇರುವಾಗ ಬರುವ ಕೆಲವು ಅಗಮಾಕ್ಷರಗಳನ್ನು ಈಗ ನೋಡೋಣ.

Note: ‘ಅಗಮಾಕ್ಷರ’ ಎಂದರೆ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವ (ಹೊಸದಾಗಿ ಬರುವ) ಅಕ್ಷರ ಅಥವಾ ಅಕ್ಷರಗಳು..

(೧) ‘ಅ’ ಕಾರಾಂತ ನಾಮಪ್ರಕೃತಿ ‘ಅಣ್ಣ ಶಬ್ದ

‘ಅಣ್ಣ’ ಎಂಬ ಅಕಾರಾಂತ ಇಲ್ಲಿಂಗದಲ್ಲಿ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಎಲ್ಲ ಕಡೆಗೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ನ ಕರವು ಆಗಮವಾಗಿ ಬರುತ್ತದೆ. ಸಂಶೋಧನೆಯಲ್ಲಿ ‘ಆ’ ಪ್ರತ್ಯಯ ಪರವಾದಾಗ ಮಾತ್ರ ಈ ಕಾರಾಗಮವಾಗುವುದಿಲ್ಲ.

(೨) ಆ ಕಾರಾಂತ ಸ್ತ್ರೀಲಿಂಗ ಚಿಕ್ಕ ಶಬ್ದ

ಪುಲ್ಲಿಂಗದಂತೆಯ ಈ ಸ್ತ್ರೀಲಿಂಗ, ಅಕಾರಾಂತ ಪ್ರಕೃತಿಯ ಮೇಲೆ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಸೇರುವಾಗ ಬಹುಶಃ ಎಲ್ಲ ಕಡೆಗೂ ನಕಾರಾಗಮ ಬಂದಿರುವುದನ್ನು ಕಾಣಬಹುದು. ಸಂಬೋಧನೆಯಲ್ಲಿ ‘ಆ ವಿಭಕ್ತಿಪ್ರತ್ಯಯ ಸೇರಿದಾಗ ಮಾತ್ರ ನ ಕಾರಾಗಮವಿಲ್ಲ..

ಮೇಲೆ ತಿಳಿಸಿದಂತೆ ಸಾಮಾನ್ಯವಾಗಿ ಅಕಾರಾಂತ ಇಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಏಕವಚನದ ವಿಭಕ್ತಿಪ್ರತ್ಯಯಗಳು ಸೇರುವಾಗ ಸಕಾರವು ಆಗಮವಾಗುತ್ತದೆಂದು ತಿಳಿಯಬೇಕು.

ಬಹುವಚನದಲ್ಲಿ ಬರುವುದಿಲ್ಲ. ಅಲ್ಲಿ ಬೇರೆ ಬಹುವಚನ ಸೂಚಕ ಆಗಮವು ಬರುವುದನ್ನು ಹಿಂದೆಯೇ ತಿಳಿಸಿದೆ.

ಈಗ ಇನ್ನೊಂದು ಬಗೆಯ ಆಗಮ ಬರುವುದನ್ನು ಕೆಳಗಿನ ಅಕಾರಾಂತ ಸಂಸಕಲಿಂಗದಲ್ಲಿ ಗಮನಿಸಿರಿ.

(೩) ಮರ’ ಎಂಬ ಅ’ ಕಾರಾಂತ ನಪುಂಸಕಲಿಂಗ ಪ್ರಕೃತಿ

‘ಮರ’ ಎಂಬ ಅಕಾರಾಂತ ನಪುಂಸಕಲಿಂಗ ನಾಮಪ್ರಕೃತಿಯ ಮೇಲೆ ೮ ವಿಧವಾದ ನಾಮವಿಭಕ್ತಿಪ್ರತ್ಯಯಗಳನ್ನು ಹಚ್ಚಿದಾಗ ಪ್ರಥಮ, ದ್ವಿತೀಯಾ, ಸಂಶೋಧನೆಗಳಲ್ಲಿ ವ ಕಾರವೂ, ಚತುರ್ಥಿಯನ್ನುಳಿದು ಬೇರೆ ಕಡೆಗಳಲ್ಲಿ ದ ಕಾರವೂ ಆಗಮಗಳಾಗಿ ಬಂದಿವೆ. – ಎಂಬುದನ್ನು ಗಮನಿಸಿರಿ.

ಆದ್ದರಿಂದ ಅಕಾರಾಂತ ಸಪ್ತಂಸಕಲಿಂಗ ಪ್ರಕೃತಿಗಳ ಮೇಲೆ ಏಕವಚನದಲ್ಲಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಪ್ರಥಮಾ, ದ್ವಿತೀಯಾ, ಸಂಬೋಧನಗಳಲ್ಲಿ ವ ಕರವೂ, ತೃತೀಯ, ಪಂಚಮೀ, ಪಷ್ಠಿ, ಸಪ್ತಮಿಗಳಲ್ಲಿ ‘ದ’ ಕಾರವೂ ಆಗಮವಾಗಿ ಬರುವುವು..

ಪ್ರಾಯಶಃ ಬರುವವು ಎಂದು ಹೇಳಿರುವದರಿಂದ ಪ್ರಾಣಿವಾಚಕಗಳಾರ ಅಕಾರಾಂತ ನಪುಂಸಕಲಿಂಗಗಳಲ್ಲಿ ಕೆಲವು ಕಡೆ ರಕಾರವು ಬರುವುದಿಲ್ಲ.

ಆಕಾರಾಂತ ನಪುಂಸಕಲಿಂಗ ಕೋಣಶಬ್ದ: ಕೋವು, ಕೋಣನನ್ನು, ಕೋಣನಿಂದ,

ಕೋಣನಿಗೆ, ಕೋಣನ ದೆಸೆಯಿಂದ, ಕೋಣನ, ಕೋಣನಲ್ಲಿ, ಕೋಣವೇ (ಕೋಣನೇ)

ಅಕಾರಾಂತ ನಪುಂಸಕಲಿಂಗ ಗರುಡ ಶಬ್ಬ:- ಗರುಡನ್ನು, ಗರುಡನನ್ನು, ಗರುಡನಿಂದ,

ಗರುಡನಿಗೆ, ಗರುಡನ ದೆಸೆಯಿಂದ, ಗರುಡಸ, ಗರುಡನಲ್ಲಿ, ಗರುಡವೇ (ಗರುಡನೇ

ಮೇಲಿನ ಕೋಣ’ ಗರುಡ ಈ ಎರಡೂ ಅಕಾರಾಂತ ನಂಸಕಲಿಂಗ ಪ್ರಕೃತಿಗಳ ಮೇಲೆ ದ್ವಿತೀಯಾ, ತೃತೀಯಾ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮೀ ಗಳಲ್ಲಿ ಇಲ್ಲಿಂಗದಂತೆ ಸಕಾರಾಗಮವೂ, ಪ್ರಥಮಾ ಮತ್ತು ಸಂಬೋಧನೆಗಳಲ್ಲಿ ವ. ಕಾರವೂ, ಸಂಬೋಧನೆಯಲ್ಲಿ ವಿಕಲ್ಪದಿಂದ, ‘ನ’ ಕಾರವೂ, ತೃತೀಯೇಯಲ್ಲಿ ವಿಕಲ್ಪದಿಂದ ಕೋಣದಿಂದ, ಗರುಡದಿಂದ ಎಂದು ಆದಾಗದ’ ಕಾರವೂ ಆಗಮಗಳಾಗುತ್ತವೆಂದು ತಿಳಿಯಬೇಕು.

(೪) ಇದ’ ಎಂಬ ಆಗಮ ಬರುವ ವಿಚಾರ

ಗುರು, ಊರು, ಮಗು, ವಧು-ಮೊದಲಾದ ಕಾರಾಂತ ಪ್ರಕೃತಿಗಳಿಗೆ ತೃತೀಯ,

ಪಂಚಮಿ, ಷಷ್ಠಿ, ಸಪ್ತಮೀ ವಿಭಕ್ತಿಗಳಲ್ಲಿ ಸ್ ಎಂದು ಆಗಮ ವಿಕಲ್ಪವಾಗಿ ಬರುವುದು,

(೫) ಆರ’ ಎಂದಾಗದ ಬರುವ ವಿಚಾರ

(1) ಉಕರಾಂತಗಳಾದ ಹಿಂದು, ಹಿಂದು ಮುಂತಾದ ಗುಣವಾಚಕ ಶಬ್ದಗಳು, 10 ಒಂದು ಎಂಬ ಸಂಖ್ಯಾವಾಚಕ ಪದ (III ಆರು, ಇದು ಮುಂತಾದ ಸರ್ವನಾಮ (v) ಕೊಡುವುದು, ಹೋಗುವುದು ಇತ್ಯಾದಿ ಉದು ಪ್ರತ್ಯಯಾಂತ ಹೃದಂತಗಳಿಗೆ ತೃತೀಯಾ, ಪಂಚಮಿ, ಷಷ್ಠಿ, ಸಪ್ತಮೀ ವಿಭಕ್ತಿಗಳಲ್ಲಿ ಆರೆ’ ಎಂದಾಗಮವು ಬರುವುದು,

ಇದುವರೆಗೆ ಪ್ರಕೃತಿಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವಾಗ ಏಕವಚನದಲ್ಲಿ ಬರುವ ನರಇನ’ ‘ಅರ’ ಎಂಬ ಆಗಮಗಳ ಸ್ಕೂಲಪರಿಚಯ ಮಾಡಿಕೊಂಡಿದ್ದೀರಿ. ಈ ಕಾರಾಗಮುವಂತೂ ವಿಭಕ್ತಿಪ್ರತ್ಯಯ ಸೇರುವಲ್ಲಷ್ಟೇ ಅಲ್ಲ, ಸಂಧಿಯ ನಿಯಮದಂತೆ ಅದು ಬರಬೇಕಾದಲ್ಲೆಲ್ಲ ಬಂದೇ ಬರುತ್ತದೆ.

Vibhakti Pratyaya Examples in Kannada

(೬) ಈಗ ಚತುರ್ಥಿ ಸಪ್ತಮೀ ಸಂಬೋಧನೆ ಮೊದಲಾದ ವಿಭಕ್ತಿಪ್ರತ್ಯಯಗಳನ್ನು

ಒಂದಕ್ಕಿಂತ ಹೆಚ್ಚಾಗಿ ಹೇಳಿದೆ. ಎಲ್ಲಿ ಎಲ್ಲಿ ಯಾವ, ಯಾವ ವಿಭಕ್ತಿಪ್ರತ್ಯಯ ಬರುತ್ತದೆಂಬುದನ್ನು ತಿಳಿಯೋಣ,

(i) ಚತುರ್ಥಿ “ಗೆ-ಇಗೆ ಕೈ-೮ಕ್ಕೆ ವಿಭಕ್ತಿಗಳು. (ಆ) ಗೆ:- ಹರಿಗೆ, ಹೊರಗೆ, ಲಕ್ಷ್ಮಿಗೆ, ಕೈಗೆ, ಮೈಗೆ, ಬರಿಗೆ, ಅತ್ತೆಗೆ,

ಹಾಯಿಗೆ (ಆ) ಎ ಐ ಕಾರಾಂತ ಪ್ರಕೃತಿಗಳಿಗೆ ಸಾಮಾನ್ಯವಾಗಿ ಗೆ ಪ್ರತ್ಯಯ ಬರುವುದು.

(1) ಇ- ರಾಮನಿಗೆ ಭೀಮನಿಗೆ, ಕಾಮನಿಗೆ, ದೇವರಿಗೆ, ಬ್ರಾಹ್ಮಣನಿಗೆ, ರಾಮರಿಗೆ

ಭೀಮರಿಗೆ, ಕಾಮರಿಗೆ, ಬ್ರಾಹ್ಮಣರಿಗೆ, ದೇವರಿಗೆ, ಕರುವಿಗೆ, ಹಸುವಿಗೆ, ಅಶ್ವನಿಗೆ

ಕರುಗಳಿಗೆ, ವಸುಗಳಿಗೆ, ಅಕ್ಕಂದಿರುಗಳಿಗೆ.

(ಸಾಮಾನ್ಯವಾಗಿ ಅಕಾರಂತ, ಉಕಾರಾಂತ, ಪ್ರತಿಗಳಿಗೆ ಪ್ರಲ್ಲಿಂಗ, ಸ್ತ್ರೀಲಿಂಗ,

ಸಾಂಸಕಲಿಂಗಗಳ ಏಕವಚನ ಬಹುವಚನಗಳೆರಡರಲ್ಲೂ ”ಗೆ’ ಎಂಬ ಚತುರ್ಥಿ ವಿಭಕ್ತಿಪ್ರತ್ಯಯ

(ಸಾಮಾನ್ಯವಾಗಿ ಅಕಾರಾಂತ ಪುಂಸಕಲಿಂಗಕ್ಕೆ ‘ಕೈ’ ಎಂಬ ವಿಭಕ್ತಿಪ್ರತ್ಯಯವು ಬರುವದು.) (ಉ) :- ಒಂದು ಅಕ್ಕೆ ಬಂದರೆ, ಇದರಂತೆ ಎರಡಳ್ಳಿ, ಪತ್ರಕ್ಕೆ ಎಷ್ಟಕ್ಕೆ, ಅಸ್ಪಕ್ಕೆ

(ಸಾಮಾನ್ಯವಾಗಿ ‘ಅಕ್ಕ’ ಪ್ರತ್ಯಯವು ‘ಈ’ ಕಾರಾಂತಗಳಾದ ನನ್ನಸಕಲಿಂಗ ಪ್ರಕೃತಿಗಳ ಮೇಲೆ ಬರುತ್ತದೆಂದು ತಿಳಿಯಬೇಕು.)

(18) ಸಂಬೋಧನೆಯ ‘ಅ, 2, 70, ಈ ಪ್ರತ್ಯಯಗಳು ಎಲ್ಲೆಲ್ಲಿ ಬರುತ್ತವೆಂಬು ರನ್ನು ಗಮನಿಸಿರಿ.

(ಆ) ಆ, :- ರಾಮಾ, ಅಣ್ಣಾ, ಭೀಮಾ, ಕೌರವ, ಅಕ್ಕಾ, ಇತ್ಯಾದಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗ ಪ್ರಕೃತಿಗಳ ಮೇಲೆ ಸಂಬೋಧನೆಯ ‘ಆ ಕಾರವು ಏಕವಚನ ದಲ್ಲಿ ಮಾತ್ರ ಬರುವುದೆಂದು ತಿಳಿಯಬೇಕು.

(ಆ) 2 ಈ 14 ಮನೇ ಅಣ್ಣನೆ ಭೀಮನೇ, ಕೌರವನ ತಾಯಿಯೇ ಅಜ್ಜಿಯ –ಇಸ್ಕಾರಿ. ತಂ ತಾಯಿ-ಇಲ್ಲಿ ‘ಈ ಬಂದಿದೆ.

ಅಕಾರಾಂತ : ಪುಲ್ಲಿಂಗದಲ್ಲಿ ನಕಾರಾಗಮ ಬಂದಲ್ಲೆಲ್ಲ ಮತ್ತು ಇರಾರಾಂತ ಸ್ತ್ರೀಲಿಂಗಗಳಲ್ಲಿ, ನಪುಂಸಕಲಿಂಗಗಳಲ್ಲಿ, ಉಕಾರಾಂತ ದಲ್ಲಿಂಗದಲ್ಲಿ ಸಂಬೋಧನಾ ವಿಭಕ್ತಿಯು ಸಾಮಾನ್ಯವಾಗಿ ಎಲ್ಲ ಕಡೆಗೂ ಬರುತ್ತದೆ.

(ಇ) ಇಲಾಖೆ- ಅಣ್ಣಂದಿರಾ, ತಾಯಂದಿರಾ, ರಾಮರುಗಳಿರಾ, ಮರಗಳಿರಾ, ತಾಯಿಯರುಗಳಿರಾ, ಅಕ್ಕಂದಿರುಗಳಿರಾ, ವಸಗಳಿರಾ ವಧುಗಳಿ ರಾ. hಡಗಳಿರಾ 1, ಕಮಲಗಳಿರಾ, ಕೋಗಿಲೆಗಳಿರಾ ದೇವರುಗಳಿರಾ -ಇತ್ಯಾದಿ. (ಬಹುವಚನದಲ್ಲಿ ಸಾಮಾನ್ಯವಾಗಿ ಪ್ರಶ್ನೆಗ, ಸ್ತ್ರೀಲಿಂಗ, ನಪುಂಸಕಲಿಂಗದ, ಎಲ್ಲ ಪ್ರಕೃತಿಗಳ ಮೇಲೂ, ಇರಾ’ ಪ್ರತ್ಯಯವು ಸೇರುವುದು. ಆಗ ಬಹುವಚನ ಸೂಚಕ ಅರು, ಗಳು, ಆರುಗಳು, ಅಂದಿರು, ಅಂದಿರುಗಳು ಇತ್ಯಾದಿ ಪ್ರತ್ಯಯಗಳು ಆಗಮಗಳಾಗಿ ಬರುತ್ತವೆ.

(III) ಸಪ್ತಮೀಯಲ್ಲಿ ಅಲ್ಲಿ, ಅಲಿ, ಒಳು, ಎಎಂದು ನಾಲ್ಕು ವಿಧವಾದ ವಿಭಕ್ತಿ ಪ್ರತ್ಯಯಗಳನ್ನು ಹೇಳಿರುವವಷ್ಟೆ ಅವು ಎಲ್ಲೆಲ್ಲಿ ಬರುವುವೆಂಬುದನ್ನು ಗಮನಿಸಿರಿ.

(ಅ) ಅಲ್ಲಿ:- ರಾಮನಲ್ಲಿ, ಭೀಮನಲ್ಲಿ, ತಾಯಿಯಲ್ಲಿ ಅಕ್ಕನಲ್ಲಿ, ಮರದಲ್ಲಿ,

ನೆಲದಲ್ಲಿ – ಇತ್ಯಾದಿ. (ಸಾಮಾನ್ಯವಾಗಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗದ ಎಲ್ಲ ಪ್ರಕೃತಿಗಳ ಮೇಲು ‘ಅಲ್ಲಿ’ ಎಂಬ ವಿಭಕ್ತಿಪ್ರತ್ಯಯವು ಸೇರುವುದು.) (ಆ) ಆಲಿ: ರಾಮನಲಿ, ಭೀಮನಲಿ, ಮರದಲಿ, ಹೊಲದಲಿ, ನೆಲದಲಿ, ಕಲ್ಲಿನಲ್ಲಿ,

(ಸಾಮಾನ್ಯವಾಗಿ ನಡುಗನ್ನಡ ಶೈಲಿಯ ಬರವಣಿಗೆಯಲ್ಲಿ ‘ಅಲಿ’ ಪ್ರತ್ಯಯದ ಪ್ರಯೋಗ ವಿಶೇಷ ಪೊನ್ನಡದಲ್ಲೂ ಕೆಲವರು ಪ್ರಯೋಗಿಸುತ್ತಾರೆ. ಇದೂ ಕೂಡ ಸಾಮಾನ್ಯವಾಗಿ ಎಲ್ಲಾ ಪಕ್ಷಗಳ ಮೇಲೂ ಬರುತ್ತದೆ.)

(1) ಒಳ: ರಾಮಗೊಳು, ಭೀಮಳು ಮರದೊಳು, ಕಲ್ಲಿನೊಳು, ಮನೆಗೆ ಎಳ ರಾಮರೊಳು, ಭೀಮರೆಳು, ಮರಗಳು, ಕಲ್ಲುಗಳು, ಮನೆಗಳೆಗಳು, ಅಮ್ಮನೊಳು, ಚಿಕ್ಕಗೊಳ್ಳು, ಅಮ್ಮಂದಿರೊಳು, “ಕ್ಕಂದಿರೊಳು-ಒಳಗೆ ಇಲ್ಲಿಗ – ಸ್ತ್ರೀಲಿಂಗ, ನಪುಂಸಕಲಿಂಗ ಮೂರರ ಏಕವಚನ ಬಹುವಚನಗಳಲ್ಲೂ ಬಳು ಸಪ್ತಮಿ ವಿಭಕ್ತಿಯನ್ನು ಬಳಸುವುದುಂಟು. ಮುಖ್ಯವಾಗಿ ನಡರಿಗೈದ ಶೈಲಿಯಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ. ಹೊಸಗನ್ನಡದಲ್ಲೂ ಬಳಸುತ್ತಾರೆ. (6) :- ಮೇಲೆ, ಕೆಳಗೆ, ಒಳಗೆ, ಹೊರಗೆ, ಹಿಂದೆ, ಮುಂದೆ ಇತ್ಯಾದಿ ದಿಗ್ವಾಚಕಗಳ ಮೇಲೆ ‘ಎ’ ಎಂಬ ಸಪ್ತಮೀ ವಿಭಕ್ತಿಪ್ರತ್ಯಯವು ಪ್ರಯೋಗಿಸಲ್ಪಡುವುದು

(೭) ಈಗ ತಾನು, ನಾನು ನೀನು, ಏನು ಇತ್ಯಾದಿ ಸರ್ವನಾಮಗಳ ಮೇಲೆ ವಿಭಕ್ತಿಪ್ರತ್ಯಯಗಳು ರೂಪಾಂತರಗಳನ್ನುನೋಡೋಣ. 

(ಆ) ‘ತಾನು’ ಸರ್ವನಾಮ ಪ್ರಕೃತಿ

ವಿಭಕ್ತಿಏಕವಚನಬಹುವಚನ
ಪ್ರಥಮಾವಿಭಕ್ತಿತಾನು+ಉ=ತಾನುತಾನು+ವ+ಉ=ತಾವು
ದ್ವಿತೀಯವಿಭಕ್ತಿತಾನು+ಅನ್ನು=ತನ್ನನ್ನುತಾನು+ಅನ್ನು=ತಮ್ಮನ್ನು
ತೃತೀಯಾವಿಭಕ್ತಿತಾನು+ಇಂದ=ತನ್ನಿಂದತಾನು+ಇಂದ=ತಮ್ಮಿಂದ
ಚತುರ್ಥಿವಿಭಕ್ತಿತಾನ+ಗೆ= ತನಗೆತಾನ+ಗೆ= ತಮಗೆ
ಪಂಚಮೀವಿಭಕ್ತಿತಾನು+ದೆಸೆಯಿಂದ=ತನ್ನದೆಸೆಯಿಂದತಾನು-ದೆಸೆಯಿಂದ =ತಮ್ಮದೆಸೆಯಿಂದ
ಸಪ್ತಮೀವಿಭಕ್ತಿತಾನು+ಅಲ್ಲಿ=ತನ್ನಲ್ಲಿತಾಳು+ಅಲ್ಲಿ= ತಮ್ಮಲ್ಲಿ

 

ಮೇಲಿನ ತಾನು, ನಾನು, ನೀವು, ಏನು ಶಬ್ದಗಳ ಸಿದ್ಧರೂಪ ನೋಡಿದರೆ ತಾನು, ನೀನು, ನಾನು ಶಬ್ದಗಳು ಪ್ರಥಮಾವಿಭಕ್ತಿಯನ್ನುಳಿದು ಉಳಿದ ವಿಭಕ್ತಿಪ್ರತ್ಯಯಗಳು ಸೇರುವಾಗ ಕ್ರಮವಾಗಿ ತನ್ನ, ನಿನ್ನ, ನನ್ನ-ಎಂಬ ರೂಪ ಧರಿಸಿ ವಿಭಕ್ತಿಪ್ರತ್ಯಯಗಳನ್ನು ಹೊಂದುತ್ತವೆ. ಚತುರ್ಥಿವಿಭಕ್ತಿ, ಪ್ರತ್ಯಯ ಸೇರುವಾಗ ಮಾತ್ರ ತನ, ನಿನ, ನನ-ರೂಪ ಧರಿಸುತ್ತವೆ. ‘ಏನು” ಎಂಬ ಪ್ರಶ್ನಾರ್ಥಕ ಸರ್ವನಾಮವು ಪ್ರಥಮಾ, ದ್ವಿತೀಯಾ, ಚತುರ್ಥಿ ವಿಭಕ್ತಿಗಳನ್ನುಳಿದು ಉಳಿದ ಕಡೆಗೆ `ಏತರ’ ಎಂದೂ, ದ್ವಿತೀಯೆಯಲ್ಲಿ ಏನು’ ಎಂದೂ, ಚತುರ್ಥಿಯಲ್ಲಿ ಮಾತ್ರ ”ಏಕ’ ಎಂದೂ ರೂಪ ಧರಿಸಿ ವಿಭಕ್ತಿಪ್ರತ್ಯಯ ಹೊಂದುತ್ತವೆ.

(೮) ದೊಡ್ಡದು, ಸಣ್ಣದು ಮೊದಲಾದ ಗುಣವಾಚಕಗಳು ವಿಭಕ್ತಿಪ್ರತ್ಯಯಗಳನ್ನು ಹೊಂದುವಾಗ ಆಗುವ ವ್ಯಾಕರಣ ಕ್ರಿಯೆಯನ್ನು ಈ ಕೆಳಗೆ ನೋಡಿರಿ:

(ಅ) ‘ದೊಡ್ಡದು’ ಶಬ್ದ ಪುಲಿಂಗದಲ್ಲಿ :

ಪ್ರಥಮಾ ದೊಡ್ಡ ಅವನು ಉ ದೊಡ್ಡವನು

ವಿಭಕ್ತಿಏಕವಚನಬಹುವಚನ
ಪ್ರಥಮಾದೊಡ್ಡ+ಅವನು+ ಉ=ದೊಡ್ಡವನುದೊಡ್ಡ+ಅವರು+ ಉ+ದೊಡ್ಡವರು
ದ್ವಿತೀಯಾದೊಡ್ಡ+ಅವನು+ಅನ್ನು+ದೊಡ್ಡವನನ್ನುದೊಡ್ಡ+ಆವರು+ಅನ್ನು+ದೊಡ್ಡವರನ್ನು
ತೃತೀಯಾದೊಡ್ಡ+ಅವನು+ಇಂದ=ದೊಡ್ಡವನಿಂದದೊಡ್ಡ+ಅವರು+ಇಂದ=ದೊಡ್ಡವರಿಂದ

 

(೧೦).ನಪುಂಸಕಲಿಂಗದಲ್ಲಿ ಈ ದೊಡ್ಡದು, ಸಣ್ಯರು, ಚಿಕ್ಕ, ಕಬ್ದಗಳು ಹೇಗಾಗುತ್ತವೆ ನೋಡಿರಿ:

(ಅ) .ದೊಡ್ಡದು’ ಶಬ್ದ ಸಪ್ಪುಂಸಕಲಿಂಗದಲ್ಲಿ

ವಿಭಕ್ತಿಏಕವಚನಬಹುವಚನ
ದ್ವಿತೀಯಾವಿಭಕ್ತಿದೊಡ್ಡದನ್ನುದೊಡ್ಡವನ್ನು
ತೃತೀಯಾವಿಭಕ್ತಿದೊಡ್ಡವರಿಂದದೊಡ್ಡವುಗಳಿಂದ
ಚತುರ್ಥಿವಿಭಕ್ತಿದೊಡ್ಡದಕ್ಕೆದೊಡ್ಡವುಗಳಿಗೆ
ಷಷ್ಠಿವಿಭಕ್ತಿದೊಡ್ಡದರದೊಡ್ಡವುಗಳ

 

ಆ) ಸಣ್ಣದು, ಚಿಕ್ಕದು ಶಬ್ದಗಳು ನಪುಂಸಕಲಿಂಗದಲ್ಲಿ

ವಿಭಕ್ತಿಏಕವಚನಬಹುವಚನ
ಪ್ರಥಮಾವಿಭಕ್ತಿಸಣ್ಣದುಸಣ್ಣವು
ತೃತೀಯಾವಿಭಕ್ತಿಸಣ್ಣದರಿಂದಸಣ್ಣವುಗಳಿಂದ
ಚತುರ್ಥಿ ವಿಭಕ್ತಿಸಣ್ಣದಕ್ಕೆಸಣ್ಣವುಗಳಿಗೆ
ಪಂಚಮಿವಿಭಕ್ತಿಸಣ್ಣದರಸಣ್ಣವುಗಳ

 

ಮೇಲೆ ವಿವರಿಸಿದಂತೆ ನಪುಂಸಕಲಿಂಗದಲ್ಲಿ ಈ ಮೂರು ಗುಣವಾಚಕ ಶಬ್ದಗಳು ಎಲ್ಲ ವಿಭಕ್ತಿಗಳ ಏಕವಚನದಲ್ಲಿ ಇದ್ದ ಹಾಗೆಯೇ ಇದ್ದು, ತೃತೀಯ, ಪಂಚಮಿ, ಷಷ್ಠಿ, ಸಪ್ತಮೀ ವಿಭಕ್ತಿಗಳಲ್ಲಿ “ಆರ” ಎಂಬ ‘ಆಗಮ‘ ವನ್ನು ಹೊಂದಿ ವಿಭಕ್ತಿಪ್ರತ್ಯಯಗಳನ್ನು ಧರಿಸಿರುತ್ತವೆ. ಬಹುವಚನದಲ್ಲಿ ಎಲ್ಲ ಕಡೆಗೂ, ದೊಡ್ಡ, ಸಣ್ಣ, ಚಿಕ್ಕ ರೂಪ ಧರಿಸಿ ಪ್ರಥಮೆಯಲ್ಲಿ “ಅವು”ಎಂಬಾಗಿನವನ್ನೂ, ಉಳಿದ ಎಲ್ಲ ಕಡೆಗೂ ಅವುಗಳು‘ ಎಂಬಾಗಸವನ್ನೂ ಧರಿಸಿ ವಿಭಕ್ತಿ ಪ್ರತ್ಯಯಗಳನ್ನು ಧರಿಸುತ್ತವೆ.

ಮೂಡಲು, ತೆಂಕಲು, ಪಡುವಲು, ಬಡಗು, ಮುಂದು, ಒಂದು, ನಡುವೆ, ಚಿತ್ರ, ಇತ್ತ, ಎತ್ತ ಮುಂತಾದ ದಿಗ್ವಾಚಕ ಶಬ್ದಗಳಿಗೆ ‘ಅಣ‘ ಎಂಬುದು ಆಗಮವಾಗಿ ಬರುವುದು,

ಉದಾಹರಣೆಗೆ:- ಮೂಡಣ, ಪಡುವಣ, ತಂಕಣ, ಬಡಗಣ, ನಡುವಣ, ಆತ್ರಣ, ಇತ್ತಣ, ಎತ್ತಣ ಹೀಗೆ ಅಣ’ ಆಗಮವು ಬಂದನಂತರ ವಿಭಕ್ತಿಪ್ರತ್ಯಯಗಳು ಸೇರುವುವು.

Here you learnt about Vibhakti pratyaya in Kannada and Vibhakti pratyaya in Kannada examples and  hope enjoyed reading❤️

 

Leave a Comment

error: Content is protected !!

Discover more from KannadaKaliyona

Subscribe now to keep reading and get access to the full archive.

Continue reading